Feeds:
Posts
Comments

Archive for the ‘ಕವನ’ Category

ನಶ್ಯಶಾಸ್ತ್ರ
=============
ಪಕ್ಶಿ-ಹೂಗಳ ಬಗ್ಗೆ ಹೇಳುತ್ತದೆ
ಜೀವಶಾಸ್ತ್ರ,ಸಸ್ಯಶಾಸ್ತ್ರ.
ಆಕ್ಷಿ-ಸೀನುಗಳ ಬಗ್ಗೆ ಹೇಳುತ್ತದೆ
ನಶ್ಯಶಾಸ್ತ್ರ.
ರಣ-ರಂಗ
==========
ವಿಧ್ಯಾರ್ಥಿಗಳಿಗೆ ಪರೀಕ್ಷೆಯೆ
ಒಂದು ದೊಡ್ಡ ರಣ.
ಎಕೆಂದರೆ ಅಲ್ಲಿ ಕೇಳುತ್ತಾರೆ
ವ್ಯಾಕ-ರಣ.
ಹೇಳಿ ಹೊಗು ಕಾರಣ
=================
ನಾಳೆಗಳ ಆಗಮನದಲ್ಲಿ ಪ್ರೀತಿಯ ಕೊಂದು
“ಮರೆತುಬಿಡು ನನ್ನ” ಎಂದು
ಹೇಳಿ ಹೋದವಳೆ.
ನೀ ಮುಡಿದ ಹೂವು ಹೊಮ್ಮುತ್ತಿರುವುದು
ಹಳೆ ನೆನಪುಗಳ
ಹೇಗೆ ನಾನು ಮರೆಯಲೆ ??
ಬೆಸ್ತು
=====
ಮೀನ ಕಂಡು
ಸಾಗರದಲ್ಲಿ ಬೆಸ್ತ ಬಿದ್ದ
ಮೀನಾಕ್ಶಿ ಕಂಡು ಪ್ರೇಮಸಾಗರದಲ್ಲಿ
ಇವನು ಬೆಸ್ತು ಬಿದ್ದ.
ಬೇಲಿ
====
ಕಟ್ಟಿಸಿದ ಅವನು ಸುಂದರ ಮನೆ
california bayಲಿ
ಚುಕ್ಕೆ ಇಟ್ಟಂತೆ ಹಾಕಿಸಿದ ಸುತ್ತ
ಮುಳ್ಳಿನ ಬೇಲಿ.
ಹೂ
=====
ಮಲ್ಲಿಗೆ ಎಂದರೆ
ಹಿಂದಿನವರು ಅನ್ನುತ್ತಿದರು
ಸುಂದರ ಹೂ
ಇಂದಿನವರು ಕೇಳುತ್ತಾರೆ
who ??
ಆಭರಣ
=========
ನಲ್ಲೆ, ಮೈ ತುಂಬಾ ಆಭರಣ
ಇದೆಂಥಾ ಶ್ರಂಖಲೆ ?
ನಿರಾಭರಣವಾಗಿದ್ದರು ನೀನೆ
ನನ್ನ ಶಕುಂತಲೆ.

Read Full Post »

                                                             ಸೂರ್ಯ

ಲೋಕಕ್ಕೆ ಬೆಳಕ ನೀಡುವ ಸೂರ್ಯ
ನಿಜಕ್ಕೂ ಬಲು ಸ್ತುತ್ಯ ನಿನ್ನ ಕಾರ್ಯ
ನೀನಿಲ್ಲದಿದ್ದರೆ ಎಲ್ಲಿಹುದು ಜೀವಜಾಲ
ನಿನ್ನಿಂದಲೇ ಬದುಕು ಬಹುಕಾಲ
ಮೂಡುಗಡೆಯಲಿ ಬೆಳಗಿ ಮಡುದಿಕ್ಕಲ್ಲಿ ಮುಳುಗಿ
ವಿಶ್ವಕ್ಕೆ ಚೇತನವ ನೀಡುತಿಹೆ ತೊಳಗಿ
ಒಮ್ಮೆ ಕಂಗೊಳಿಸಿ ಜೀವಜಾಲಗಳನೆಚ್ಚರಿಸಿ
ಮತ್ತೆ ಮರೆಯಾಗುತಿಹೆ ಜಗಕೆ ತಂಪನು ಸುರಿಸಿ

Read Full Post »

                                                             ಬಾಳಿನ ಅರ್ಥ

ಏರಿದೆ ಗಗನಕೆ ಬೆಲೆಯು
ಇಲ್ಲವು ಬಾಳಿಗೆ ನೆಲೆಯುಹೆಚ್ಚಿದೆ ಬೆಲೆ ಎಲ್ಲದಕೂ
ಮುದುಡಿದೆ ಮನುಜನ ಬದುಕು
ಕಾಲಿಗೆ ಎಳೆದರೆ ತಲೆ ಕಡೆ ಬಾರದು
ತಲೆ ಕಡೆ ಎಳೆದರೆ ಕಾಲದು ಮುಚ್ಚದುಹಾಸಿಗೆ ಇದ್ದಷ್ಟು ಕಾಲನು ಚಾಚು
ಎಂದರು ಹಿರಿಯರು ನೀತಿಯ ಮಾತು
ಹಾಸಿಗೆ ಎಂಬುದೆ ಇಲ್ಲದೆ ಹೋದರೆ
ಎಲ್ಲಿಗೆ ಚಾಚಲಿ ಕಾಲನು ಸೋತು
ಎಲ್ಲೆಡೆ ತುಂಬಿದೆ ಕಳ್ಳರ ಸಂತೆ
ಎಲ್ಲರ ಮಾತು ಸುಳ್ಳಿನ ಕಂತೆ
ನ್ಯಾಯಕೆ ಧರ್ಮಕೆ ಬೆಲೆಯೆ ಇಲ್ಲ
ಅರ್ಹತೆ ಯೊಗ್ಯತೆ ನೋಡುವರಿಲ್ಲಿ
ಜೀವನ ಮಟ್ಟವು ಎಲ್ಲೆಡೆ ಕುಸಿದಿದೆ
ಬಾಳಿಗೆ ಅರ್ಥವೆ ಇಲ್ಲವೆ ಆಗಿದೆ
ಬಡವ ಬಲ್ಲಿದ ಎನ್ನುವ ಭೇದ
ಮೇಲು ಕೀಳು ಎನ್ನುವ ವಾದ
ಮುಳ್ಳದು ನಾಡಿನ [...]

Read Full Post »